Saturday 22 October 2011

ಬೇಸರಿಕೆ

ಮತ್ತದೇ ಬೇಸರ, ಅದೇ ಸಂಜೆ! ಶನಿವಾರದ ಸಾಪ್ತಾಹಿಕ ಅಂಕಣ,ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ  ನಾನ್ಯಾಕೋ ಗದ್ಯದಿಂದ  ಪದ್ಯ  ಪ್ರಕಾರದ ಕಡೆಗೇ ವಾಲುತ್ತಿದ್ದೇನೆ ಎನ್ನಿಸುತ್ತಿದೆ.  ಈ ಶಿಫ್ಟ್ ನ ಬಗ್ಗೂ , ಈ ಕವನದ ಬಗ್ಗೂ ಕಮೆಂಟಿಸಿ. :-) 


 ಮುಸ್ಸಂಜೆ ಮಸುಗಪ್ಪಿನಲಿ ಹಬ್ಬಿರುವ ಬೇಸರವೇ,
ಕನಿಕರವು ಮೂಡಿ ಹೊರಟುಹೋಗಲು ಒಲ್ಲೆಯೇಕೆ?
ಉಸಿರ ಮರೆಸುವ ಹಾಗೆ ನಿಡುಸುಯ್ದ ನಿಟ್ಟುಸಿರೆ,
ಮರಳಿ ಬಾರದ ಹಾಗೆ ಮರೆತಿದ್ದು ನಿನ್ನ ಹೆಸರೆ?||ಪ||

ಬಡವಾದ ಬದುಕಿನಲಿ ಕನಸೊಂದು ಹೊರಳಿದಲ್ಲೆ
ಅವಲತ್ತುಕೊಂಡಿರಲು ಸಹಕರಿಸಬಾರದೆ ತಾ ನಲ್ಲೆ.
ಯಾರೂ ಕರೆಯದೆ ಬರುವ ನೆನಪುಗಳ ಆಕ್ರಮಣ
ಮತ್ತಲ್ಲೇ ಚಿಗುರುವ ಬೇಸರಕೆ ಏಕೆ ಬೇಕು ಕಾರಣ||೧||

ಕನಸೆಲ್ಲ ಬರಿದಾಗಿ ಶೂನ್ಯವೇ ಸ್ಥಿರವಾಗಿ  ನಿಲ್ಲಬಹುದೇ
ಕರಗಿ ಹೋಗಿದ್ದು ಮರುಗಿ ಬಂದಾಗ  ತಿರುಗಿ ಸೇರಬಹುದೇ
ಮರೆತು ಹೋದ ಸ್ಪೂರ್ತಿ ತಿರುಗಿ ಬಂದು ಕಾಡಿದಂತಾಗಿ
ತೊಳಲಾಡಿತೆ ಮನವು ಇದ್ದಕ್ಕಿದ್ದಲ್ಲೇ ಬವಳಿ ಬಂದಂತಾಗಿ||೨||

ಮನತುಂಬಿ ಕೇಳಿದೆನು ಮರೆತು ಹೋಗದಿರು ನನ್ನುಸಿರೆ
ಉಸಿರೇ ಇಲ್ಲದ ಮೇಲೆ ಏನಿದೆ ಜೀವನವು ಬರಿ ಹೆಸರೆ
ಬೇಸರಿಕೆ ತಾನೇ ಬೇಸರಿಸಿ, ತನ್ನದೇ ಏಕಾಂತಕೆ ತಲ್ಲಣಿಸಿ
ಹೋಗದೇ ಉಳಿಯಿತೇ, ಮುರಿಯದ ಮೌನಕೆ ಕನಿಕರಿಸಿ||೩||

2 comments:

  1. yenthe bhaava poorana kaavya... wah..

    ReplyDelete
  2. ಧನ್ಯವಾದಗಳು ಸಿಂಧುಚಂದ್ರ ಅವರೆ. :)

    ReplyDelete