Friday 16 December 2011

ಮನುಜ...



ಯಾರ ಹೊಗಳಿಕೆಗೆ ಏನು ಬೆಲೆ;
ಯಾವ ಮೆಚ್ಚಿಗೆಗೆ, ಏಕೆ ನಟನೆ
ದೇವನಿರುತ ಸರ್ವಾಂತರ್ಯಾಮಿಯಾಗಿ
ಎಲ್ಲಬಲ್ಲವನ ಮೆಚ್ಚಿಸದೇ ದಕ್ಕೀತೆ ಸಗ್ಗ
ನಮ್ಮತನವ ನಾವು ಮರೆತು, ಜನರ
ವಿಚಾರಕೆ ಸಲ್ಲದ ಮನ್ನಣೆಯಿತ್ತು.

ಅನಂತ ಮನದ ಸುತ್ತ ಚಿಕ್ಕ ಬೇಲಿ ಹಾಕಿ
ಎಲ್ಲ ನೆನಪಿಟ್ಟುಕೊಂಬೆನೆಂಬ ಹೊಂಚಹಾಕಿ
ಬಣ್ಣದ ಕೋಟೆಯ ಮಧ್ಯದಲಿ ನಾವಡಗಿ
ನಮ್ಮ ಹಗಲುವೇಷಕೆ ನಾವೆ ನಾಚಿ
ನಮ್ಮದಲ್ಲದ ಬದುಕ ನಾವು ಬಾಳಿ
ಕಳೆದುಕೊಂಡೆವೆಂದು ಪರತಪಿಸಬಹುದೆ.

ಅನ್ಯರತಪ್ಪಿಗೆ ಭೂತಗನ್ನಡಿಯಿಟ್ಟು
ತನ್ನ ತಪ್ಪನು ಒಪ್ಪಿತಗೊಳಿಸಿ,
ವಾದದಲ್ಲಿ ಗೆದ್ದೆನೆಂದರೆ,ಮಾತಿನಲ್ಲಿ
ಮೀರಿದೆನೆಂದರೆ ಕ್ಷಮೆಯು ಉಂಟೇ;
ನಿಜದ ಪಶ್ಚಾತ್ತಾಪವಿರದೆ ಮಾಡಿದ
ಪಾಪದೋಷಕೆ ಮುಕ್ತಿಯುಂಟೇ?

ಇರಲಾರದ ಭ್ರಮೆಯ ಮೂಡಿಸಿ
ಮನದ ಮೇಲೆ ಘಾಸಿಮಾಡಿ
ಬುದ್ಧಿಯುದ್ಧವ ಗೆದ್ದೆನೆಂದರೇನಂತೆ
ಗೆಲ್ಲಲಾದೀತೆ ನಿಜವ ಬುದ್ಧಿಮಾತ್ರಕೆ
ಸುಳ್ಳಿನಲೆಯ ಮೇಲೆ ನಿಜವ ಸೇರಿ
ದಕ್ಕಬಹುದೇ ದಿಕ್ಕು, ದೇವಬಲ್ಲ!

2 comments: